Tuesday, September 25, 2012

idu namma jameenu kathe

ಅಡ್ಡಡ್ಡ ಬೆಳೆ ಬೆಳೆಯುತ್ತಿದ್ದ ನಮ್ಮ ಜಮೀನನ್ನು ನಮ್ಮ ಚಿಕ್ಕಮ್ಮನ (ಚಿಕ್ಕಪ್ಪನ )ಕಡೆಯವರು ಈಗೊಂದು 15 ದಿನಗಳಿಂದೀಚೆಗೆ ಉದ್ದುದ್ದ ಬೆಳೆ ಬೆಳೆಯಬೇಕೆಂದು ಸುರುಮಾಡಿದ್ದಾರೆ ಏಕೆ ಗೊತ್ತೇ ಹಿಂದೊಮ್ಮೆ ಮನೆಯ ಹಿರಿಯ ಮಗನಾದ ನಮ್ಮ ತಂದೆ ಬದುಕಿದ್ದಾಗ ಹಂಚಿಕೊಂಡಿದ್ದ ರೀತಿಗೆ  ಸಂಪೂರ್ಣ ವಿರುದ್ದವಾಗಿದೆ ಹೇ. ಆಗ ಹೇಮಗಿರಿ ರಸ್ತೆ 

Sunday, February 27, 2011

ಹೊಸಹೊಳಲಿನ ರಾಜಶೇಖರ್ ಇಂಡೇನ್ ಗ್ಯಾಸ್ ಏಜೆನ್ಸಿಸ್ ನ "ಟ್ರೈನಿ ಫ್ಯಾಮಿಲಿ ಗೂಂಡಾ" ಬೀಪೇಂದ್ರನ ಅನುಚಿತ ಅಸಭ್ಯ ವರ್ತನೆ, ಜೊತೆಗೆ 'ಕುಮಾರಿ' ಎಂಬ ಹೆಸರಿನ ಅರ್ಥಾತ್ ಹುರುಮಾರಿ.

ಮನಸ್ಸು ಮಾಡುತ್ತಿದ್ದಾರೆ, 'ಸಾರ್ವಜನಿಕ ಅನಿಲ ಗ್ರಾಹಕರು ಸದ್ಯಕ್ಕೆ ಇವರಿಬ್ಬರಿಗೆ ಹಾಕಿಸಲು' ಕಾನೂನಿನ ಕೈಯಿಂದ ಛೀಮಾರಿ!

Tuesday, January 25, 2011

ಗ್ರಂಥಾಲಯಕ್ಕೆ ಹೊಸ ದಿಗಂತ, ವಾರ್ತಾ ಭಾರತಿ ಪತ್ರಿಕೆಗಳು ಉಚಿತವಾಗಿ ಸರಬರಾಜು ಆಗುತ್ತಿವೆಯಂತೆ! ನಿಜಾನಾ?

ಸ್ಟಾರ್ ಆಫ್ ಮಂಡ್ಯ , ಪೌರವಾಣಿ, ಕೆಮ್ಮುಗಿಲು, ಮಂಡ್ಯ ಸುದ್ದಿ ,ಹಾಗೂ ಪ್ರಜಾವಾರ್ತೆ ತರಹದ ಮೂರ್ನಾಲ್ಕು ಪತ್ರಿಕೆಗಳನ್ನು ಪುಟ್ಟ ಪತ್ರಿಕೊಧ್ಯಮಿಗಳು ತಮ್ಮ ಪತ್ರಿಕೆಗಳ ಪ್ರಚಾರಕ್ಕೂ ಹಾಗೂ ಸಾರ್ವಜನಿಕರ ಉಪಯೋಗಕ್ಕೂ ಉಚಿತವಾಗಿ ಗ್ರಂಥಾಲಯಕ್ಕೆ ನೀಡುತ್ತಿರಬಹುದೇನೋ ಅದನ್ನು ನಂಬಬಹುದು ಆದರೆ ವಾರ್ತಾ ಭಾರತಿ, ಹೊಸ ದಿಗಂತ ಪತ್ರಿಕೆಗಳವರೂ ಕೆ.ಆರ್.ಪೇಟೆ ಗ್ರಂಥಾಲಯಕ್ಕೆ ಉಚಿತವಾಗಿ ಹಾಕುತ್ತಿದ್ದಾರಂತೆ! ನಂಬಲಿಕ್ಕಾಗುತ್ತಾ? ಖಂಡಿತಾ ನಿಜವಲ್ಲ ಈ ಪತ್ರಿಕೆಗಳು ಬಂದರೂ ಬರದಿದ್ದರೂ ಈ ಪತ್ರಿಕೆಗಳನ್ನು ಬಚ್ಚಿಡುತ್ತಾರೆ ಅದೇನೋ ಅದರಲ್ಲಿನ ಮರ್ಮ ತಿಳಿಯದು. ನೆನ್ನೆ ಇದ್ದ ಪತ್ರಿಕೆ ಇವತ್ತು ಇಲ್ಲವಲ್ಲ ಎಂದು ಕೇಳಿದರೆ ತಮ್ಮ ಸೋಮಾರಿತನ ಮರೆಮಾಚಲು ಮೇಲಿನಂತೆ ಹೇಳುತ್ತಾರೆ ಈ ಪತ್ರಿಕೆಗಳನ್ನು ಪ್ರತಿದಿನ ಗ್ರಂಥಾಲಯದಲ್ಲಿ ಹಾಕಿಸುತ್ತಿರುವುದು ಅಕಸ್ಮಾತ್ ಓದುಗರಿಗೆ ತಿಳಿದರೆ ಪತ್ರಿಕೆಗಳು ಬರದಿದ್ದ ದಿನದಲ್ಲಿ ಏಕೆ ಬಂದಿಲ್ಲ ಎಂದು ಜವಾಬ್ದಾರಿಯುತ ಓದುಗರು ದುಂಬಾಲು ಬೀಳುವುದು ಸಹಜ ಎಂದು ಅರಿತಿರುವ ಈ ಸಿಬ್ಬಂದಿಗಳು ಅವುಗಳನ್ನು ಬಂದರೂ ಬರದಿದ್ದರೂ ಬಚ್ಚಿಡುತ್ತಾರೆ ,ಎಂಬುದನ್ನು ಓದುಗರಾದ ನಾವೂ ಸೂಕ್ಷ್ಮವಾಗಿ ಅರಿಯಬೇಕು.
ಗ್ರಂಥಾಲಯ ಓದುಗರ ಪ್ರತಿನಿಧಿ ಹಾಗು ಲೈಬ್ರರಿ ವಾಲಂಟಿಯರ್ ಮಲ್ಲಿಕಾರ್ಜುನ ಎಂಬುವರೊಬ್ಬರು " ಪತ್ರಿಕಾ ಸರಬರಾಜುದಾರರು ಸರಿಯಾಗಿ ಪತ್ರಿಕೆಗಳನ್ನು ಹಾಕದೆ ಇರುವುದಕ್ಕೆ ಅಥವಾ ಹಾಕಿದ್ದರೂ ನಿಮ್ಮಿಂದ ಸಾರ್ವಜನಿಕರಿಗೆ ಒದಗಿಸಲಾಗದಿರುವುದಕ್ಕೆ ನಿಮ್ಮಲ್ಲಿರುವ ಈ ಕರ್ತವ್ಯ ಅಸಮರ್ಥತೆ , ಸಿಬ್ಬಂದಿಗಳಲ್ಲಿನ ಅಶಿಸ್ತು ಮತ್ತು ಅವಶ್ಯಕ ಸಾಮಾನ್ಯ ಜ್ಞಾನವಿಲ್ಲದಿರುವುದೇ ಕಾರಣ ನಿಮ್ಮಂಥವರ ಇಂತ ಅಜ್ಞಾನದಿಂದ, ಅಸಮರ್ಥತೆಯಿಂದ ಕೆಲ ಓದುಗರಿಗೆ ಮಾಹಿತಿಗಳ ನಷ್ಟವಾಗುತ್ತಿದೆ, ಅಜ್ಞಾನಿಗಳಾಗಲು ಕಾರಣವಾಗುತ್ತಿದೆ , ಉದ್ಯೋಗಿಗಳಾಗಲು ವಿಳಂಬವಾಗುತ್ತಿದೆ. ಇನ್ನೂ ಕೆಲವರಿಗೆ ಹೆಚ್ಚು ಆರ್ಥಿಕ ನಷ್ಟ ಉಂಟಾಗುತ್ತಿದೆ ವ್ಯವಹಾರಧಾರರಿಗೆ ಮಾತ್ರ ಉಪಯೋಗವಾಗುತ್ತಿದೆ, ಜೊತೆಗೆ ಸರ್ಕಾರದ ಬೊಕ್ಕಸಕ್ಕೂ ಹೊರೆ ಬೀಳುತ್ತಿದೆ. ಇವುಗಲೆಲ್ಲವುಗಳ ಅರಿವಿದ್ದರೂ ಬೇಕೆಂತಲೇ ಕೆಲ ಸಿಬ್ಬಂದಿಗಳು ಮೌನದಿಂದಿದ್ದೀರಿ ಎಂದರೆ ಜವಾಬ್ದಾರಿಯಿಲ್ಲದವರಂತೆ ಸುಮ್ಮನೆ ಕಾಲಹರಣಮಾಡಿ ಪುಗುಸಟ್ಟೆ ಸಂಬಳ ಪಡೆದು ಹೋಗುವುದಕ್ಕೆ ಎಂದೇ ಅರ್ಥ. ಇಂತಹ ನಿಮ್ಮ ನಿಲುವಿಗೆ ಓದುಗರಾದ ನಾವು ಅದರಲ್ಲೂ ಸ್ವಯಂ ಸಾರ್ವಜನಿಕ ಓದುಗರ ಪ್ರತಿನಿಧಿಯಾದವರು ಸುಮ್ಮನಿರಲಿಕ್ಕಾಗುವುದಿಲ್ಲವೆಂದರಿತು ನಿಮಗೆ ನಮ್ಮ ಕೈಲಾದ ಉತ್ತಮ ಸಾರ್ವಜನಿಕ ಸ್ನೇಹಿ ಗ್ರಂಥಾಲಯ ನಿರ್ವಹಣೆ ಬಗ್ಗೆ ತರಬೇತಿಯನ್ನು ಉಚಿತವಾಗಿ ನೀಡುತ್ತಾ ಬರುತ್ತಿದ್ದರೂ ಎಲ್ಲಾ ಸಿಬ್ಬಂದಿಗಳು ಪಾರದರ್ಶಕತೆಯನ್ನು ತೋರುತ್ತಿಲ್ಲವಾದ್ದರಿಂದ, ಹಾಗೂ ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸ್ವಯಂ ಜನಪ್ರತಿನಿಧಿಯಾಗಿ/ಸೋಧರನ ಸ್ಥಾನದಲ್ಲಿ ನಿಂತು ಎಷ್ಟೇ ತಿಳುವಳಿಕೆಗಳನ್ನು ಮತ್ತು ಅವಕಾಶಗಳನ್ನೂ ನೀಡುತ್ತಾ ಬಂದಿದ್ದರೂ ಸಿಬ್ಬಂದಿಗಳಾದ ನೀವು ಸರಿಯಾಗಿ ಪಾಲನೆ ಮಾಡದೆ ತಮ್ಮಗಳ ಕೆಲ ಅಕ್ಕಪಕ್ಕದ ಸ್ನೇಹಿತರ ಪ್ರೇರಣೆಯಿಂದ ಜವಾಬ್ದಾರಿಯುತ ಸಾರ್ವಜನಿಕ ಸೇವೆಗೆ ವಿರುದ್ದವಾಗಿ ಕರ್ತವ್ಯ ಮಾಡುತ್ತೇವೆ ಎಂದು ವಾದಿಸುತ್ತಿರುವುದರಿಂದ ನಿಮ್ಮಂಥ ನಿಷ್ಪ್ರಯೋಜಕ ಸಿಬ್ಬಂದಿಗಳ ಸೇವೆ ನಮಗೆ ಬೇಡವೆಂದು ಅದಕ್ಕೆ ನಿಮ್ಮ ಮೇಲೆ ಕರ್ತವ್ಯ ಸ೦ಭ೦ಧಿತ ದೂರು ನೀಡಲು ಯೋಚಿಸಿದ್ದೆವು, ನೀವುಗಳೆಲ್ಲರೂ ಇದೆ ರೀತಿ ಸೋಮಾರಿತನ ಪ್ರಧರ್ಶಿಸಿದರೆ ಅದನ್ನು ಕಾರ್ಯರೂಪಕ್ಕೆ ತರಲು ಚಿಂತಿಸಬೇಕಾಗುತ್ತದೆ" ಎಂದು ಎಚ್ಚರಿಕೆಯನ್ನು ನೀಡಿದರು. ಅಲ್ಲಿ ನೆರೆದಿದ್ದ ಓದುಗರೆಲ್ಲರೂ ಸೇರಿ ಕಟ್ಟಕಡೆಯ ಅವಕಾಶವನ್ನು ನೀಡಿದೆವು.

Monday, January 24, 2011

ಗ್ರಂಥಾಲಯದ ಪ್ರಪ್ರಥಮ ಸೂಚನಾ ಪತ್ರ ಹಾಗೂ ವಿಶೇಷ ಸಭೆ

ದಿನ ಅಂದರೆ ದಿನಾಂಕ ೨೪ ಜನವರಿ ೨೦೧೧ ರಂದು ಕೆ.ಆರ್. ಪೇಟೆ ತಾಲೋಕಿನ ಗ್ರಂಥಾಲಯದ ಸಿಬ್ಬಂದಿಗಳು ತಮ್ಮ ರಾಜ್ಯ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಮುಖ್ಯಸ್ಥರೊಂದಿಗೆ ಸಭೆ ಏರ್ಪಡಿಸಿಕೊಂಡಿದ್ದರೂ ಸಾರ್ವಜನಿಕರಿಗೆ ತಿಳಿಸುವ ಉದ್ದೇಶವಿದ್ದಿದ್ದರೆ ಹಿಂದಿನ ದಿನಾಂಕ ೨೨ ಜನವರಿ ೨೦೧೧ ರ೦ದು ಮುಂಚಿತವಾಗಿ ಸೂಚನೆ ಪತ್ರ ಹಾಕಬೇಕಿತ್ತು ಆದರೆ ಈ ವಿಷಯ ಜನಗಳಿಗೆ ಗೊತ್ತಾಗಿ ಎಲ್ಲಿ ತಮ್ಮ ಕುತಂತ್ರದ ಬಂಡವಾಳ ಬಯಲು ಮಾಡಿಬಿಟ್ಟಾರೆಂದು ಮೊದಲೇ ಯೋಚಿಸಿ ಉಪಾಯದಿಂದ ಸಭೆಯ ದಿನದ ಬೆಳಿಗ್ಗೆ ೧೧:೨೫ ಘಂಟೆಗೆ ಒಂದು ಚೀಟಿ ತಂದು ಬಾಗಿಲಿನ ಮೇಲೆ ಅಂಟಿಸಿದರು ಮತ್ತು ಬೇರೆ ದಿನಗಳಂದು ಗ್ರಂಥಾಲಯದ ಸಂಜೆಯ ಸಮಯದಲ್ಲಿ ಕನಸಿಗೂ ಬರದ, ಆಗೊಮ್ಮೆ ಈಗೊಮ್ಮೆ ಬೆಳಗಿನ ವೇಳೆಯಲ್ಲಿ ಮಾತ್ರ ಕಾಣಸಿಗುವ, ತಮ್ಮ ಗ್ರಂಥಪಾಲಕರ ಒಂದಿಬ್ಬರು ಸ್ಥಳೀಯ ಸ್ನೇಹಿತ ಓದುಗರುಗಳು ತಮಗೇನಾದರೂ ದಿನ ಪತ್ರಿಕೆಯ ಬೇಕಾದ ಭಾಗವನ್ನು ಕತ್ತರಿಸಿ ಸಿಕ್ಕಿ ಬೀಳುವ ಸಮಯ ಬಂದರೆ ತಮ್ಮನ್ನು ಮನ್ನಿಸಲೆಂದು ಹಾಗೂ ದಿನ ಪತ್ರಿಕೆಗಳನ್ನು ತಮ್ಮ ವಯಕ್ತಿಕ ಉಪಯೋಗಕ್ಕೊಸ್ಕರ ಬಳಸಿಕ್ಕೊಳ್ಳಲು ಕೆಲವೊಮ್ಮೆ ಕರುಣೆ ತೋರಲೆಂದು ಈತನ ಜೊತೆ ಮತ್ತು ಗ್ರಂಥಪಾಕರ ಜೊತೆ ತುಂಬಾ ಸಲಿಗೆಯಿಂದ ಸ್ವಾರ್ಥ ಪ್ರೀತಿ ತೋರುವುದರಿಂದ ಅಂಥವರ ಜೊತೆ ಕೆಲಸದ ವೇಳೆಯಲ್ಲೇ ಹರಟೆ ಹೊಡೆಯುವ ಸಿಬ್ಬಂದಿಯವರುಗಳಲ್ಲಿ ಒಬ್ಬರಾದ ಇಲ್ಲಿನ ಗ್ರೂಪ್ 'ಡಿ' ನೌಕರರು ಮಿಸ್ ಹಾಗದೆ ಹಾಜರಿದ್ದುದಲ್ಲದೆ ಅಂದು ಓದುಗರನ್ನು ಏರಿದ ದ್ವನಿಯಲ್ಲಿ ಬೇಗ ಬೇಗ ಹೊರ ಹೋಗುವಂತೆ ಆಧೇಶಿಸುತ್ತಿದ್ದರು.ಈ ದಿನದ ಆ ಸೂಚನಾ ಚೀಟಿಯೇ ಈ ಗ್ರಂಥಾಲಯದಲ್ಲಿ ಸಭೆ ನಡೆಸುತ್ತಿರುವುದಕ್ಕೆ ಸಂಭಂಧಪಟ್ಟಂತೆ ಪ್ರಪ್ರಥಮ ಸೂಚನಾ ಚೀಟಿ ಇದುವೆ ಇವರ ಮೊದಲ ನಿಷ್ಠೆ ಗ್ರಂಥಾಲಯದ ಸಂಬಳಕ್ಕೆ. ಈ ಅರ್ಧ೦ಭರ್ದ ನಿಷ್ಠೆಯನ್ನು ತಮ್ಮ ಸಹೋದ್ಯೋಗಿಗಳಿಗೆ ಮತ್ತು ಮೇಲಧಿಕಾರಿಗಳಿಗೆ ತೋರಿಸಲು ಇವರ ಮೊದಲ ಪ್ರಯತ್ನವೆಂದೆ ಹೇಳಬಹುದು. ಆದರೂ ಇವರ ಕುತಂತ್ರ ಬುದ್ಧಿ ಯಾಗಿಗೆ ತಾನೇ ಗೊತ್ತಾಗೊದಿಲ್ಲಾ? ಪ್ರತಿದಿನ ಇಲ್ಲಿನ ಗ್ರಂಥಾಲಯದ ಸಿಬ್ಬಂದಿಗಳು ಸಾರ್ವಜನಿಕ ಓದುಗರಿಗೆ ಸರಿಯಾದ ಸೇವೆಯನ್ನೋದಗಿಸಲಾಗದೆ ಶಾಪ ಹಾಕಿಸಿಕೊಳ್ಳುವುದು ಹೊಸದೇನಲ್ಲ ಮತ್ತು ಇವರು ಗ್ರಂಥಾಲಯದ ಸೇಸ್ಸು ಕೊಡಿಸಿ,ನಮ್ಮ ಸ೦ಭಳ ಸರಿಯಾದ ವೇಳೆಗೆ ಬರುವಂತೆ ಮಾಡಲು ನಿಮ್ಮಿಂದ ಸಾದ್ಯವಾದರೆ ಸರಿಯಾಗಿ ಸೇವೆ ಕೊಡುತ್ತೇವೆ ಎನ್ನುವಂತ ಪ್ರತಿರೋಧ ನಿಂತಿಲ್ಲ ಆದರೂ ಹಿಂದಿನ ಎಲ್ಲಾ ಬಂದಿರದ ಪ್ರಮುಖ ಪತ್ರಿಕೆಗಳಿಗೂ ಪ್ರೆಸೆಂಟ್ ನೀಡಿ ಬಿಲ್ಲ್ನಲ್ಲಿ ಮಾತ್ರ ಸರಿಯಾದ ಮೊತ್ತ ಬರೆಯಿಸಿ/ಬರೆದು ಹಣ ಪಡೆದು/ ಹಣ ಸಿಗುವಂತೆ ನೋಡಿಕೊಂಡು ಪತ್ರಿಕಾ ಸರಬರಾಜುದಾರರ ಮುದ್ದಿನ ಕಣ್ಮಣಿಯಾಗಿದ್ದಾರೆ. ಆ ಸಭೆಯ ಸೂಚನಾ ಚೀಟಿಯನ್ನು ಕನಿಷ್ಠ ಪಕ್ಷ ಸಭೆಯ ದಿನದ ಬೆಳಗ್ಗೆ ಭಾಗಿಲು ತೆರೆದಾಗಲಾದರೂ ಹಾಕಬಹುದಿತ್ತು.ಹಾಗೆ ಮಾಡಿದ್ದರೆ ಕಾಳಜಿಯಿರುವ ಕೆಲವರಾದರೂ ಇಲ್ಲಿನ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದರೆನೋ! ಹಾಗು ಇವರಿಗೆ ಮುನ್ಸಿಪಾಲಿಟಿಯಿಂದ ದೊರೆಯದಿರುವ ಸೇಸ್ಸನ್ನು ನ್ಯಾಯಯುತವಾಗಿ ಕೇಳಲು, ಇನ್ನಿತರೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಲ್ಲಿ ಸಾರ್ವಜನಿಕರ ಸಹಕಾರ ಸಿಗಬಹುದಿತ್ತಲ್ಲವೇ ? ಇವರ ಎಲ್ಲಾ ವಿಷಯ ಗೊತ್ತಿರೋ ಕೆಲ ತರಭೆತುಧಾರ ಓದುಗ ಮಂದಿಗೆ ಇಲ್ಲಿನ ಸಭೆಯ ವಿಚಾರ ಮೊದಲೇ ತಿಳಿದರೆ ನನ್ನ ಬಗ್ಗೆ ಕಂಪ್ಲೈಂಟ್ ಮಾಡಿ ಸಬೆಗೆ ಹಾಜರಾಗುವ ಸಹೋಧ್ಯೋಗಿ ಸಭಿಕರ ಎದುರು ನನ್ನ (ಇಲ್ಲದ)ಮಾನ ಕಳೆದು ಹೋದೀತು ಎಂದು ಬ್ರಮಿಸಿ ಈ ರೆಡಿಮೇಡ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಒಟ್ಟಿನಲ್ಲಿ ಇವರಲ್ಲಿ ೯೦% ಎಲ್ಲರ ಉದ್ದೇಶವಿಷ್ಟೇ :
ನಮಗೆ ಸಂಬಳ ಸರಿಯಾಗಿ ಸಿಗಬೇಕು, ಕಾಲಕಾಲಕ್ಕೆ ಏರಿಕೆಯಾಗುವಂತೆ ನೋಡಿಕೊಳ್ಳಬೇಕು, ಸಭೆ ಸಮಾರಂಭಗಳಲ್ಲಿ ನಮ್ಮ ಬಗ್ಗೆ ಸಿಬ್ಬಂದಿ-ಕರ್ತವ್ಯಕ್ಕೆ ಸ೦ಭ೦ಧಿತ ಯಾವುದೇ ದೂರುಗಳನ್ನೂ ತಡೆಗಟ್ಟಬೇಕು, ಇದರ ಬದಲೂ ಮೇಲಧಿಕಾರಿಗಳ ಅನುಕಂಪ ಗಿಟ್ಟಿಸಬೇಕು. ತಮ್ಮ ಸ್ವಾರ್ಥ ಸೇವೆಗೆ ಖಾಲಿ ಹೊಗಳಿಕೆ ಮಾತ್ರ ಪಡೆಯಬೇಕು, ಓದುಗರನ್ನು ನಮ್ಮ ವಯಕ್ತಿಕ ಆಡಳಿತದ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು, ಪ್ರತಿರೋಧಿಸುವವರಿಗೆ ಕುತಂತ್ರದಿಂದ ಸುಳ್ಳು ಹೇಳಬೇಕು/ತಮ್ಮ ಕಡೆಯವರಿಂದ ಬೇಕಂತಲೇ ಜಗಳ ಮಾಡಿಸಿ ಬೆದರಿಸಬೇಕು ಅಥವಾ ಗ್ರಂಥಾಲಯ ಇಲಾಕೆಗೆ ಅಂಟಿಕೊಂಡಿರುವ ಬೇರಾವುದೇ ಇಲಾಕೆಗಳ ದೌರ್ಭಲ್ಯವನ್ನು ಪ್ರಸ್ತಾಪಿಸಿ ತಮ್ಮ ಮೇಲಿನ ಕಳ೦ಕಗಳನ್ನು ಮರೆಮಾಚಿ ಬೇರೆ ಕಡೆಗೆ ಸಾರ್ವಜನಿಕರ ಆಕ್ರೋಶವನ್ನು ಕೇಂದ್ರಿಕರಿಸಬೇಕು, ತಮ್ಮನ್ನು ತಮ್ಮ ತಕ್ಕದಲ್ಲುದಾದ ಕರ್ತವ್ಯವನ್ನು ಯಾರೂ ಪ್ರಶ್ನಿಸದಂತೆ ಎಚ್ಚರವಹಿಸಬೇಕು, ಕರ್ತವ್ಯ ಸಮಯ ಕಡಿಮೆಯಾಗಬೇಕು, ನಾವುಗಳು ನಮ್ಮ ದೈನಂದಿನ ಬೇರೆ ವ್ಯವಹಾರಗಳಲ್ಲಿ ತೊಡಗಿ ಅಲ್ಲೂ ಆಧಾಯ ಗಳಿಸಬೇಕು, ಸಂಜೆ ವೇಳೆ ವಿದ್ಯುತ್ ಸಮಸ್ಯೆಯಿರುವಂತೆ ಎಚ್ಚರವಹಿಸಬೇಕು, ಬೇಗ ಮನೆಗೆ ಹೋಗಬೇಕು , ವಿಳಂಬವಾಗಿ ಕರ್ತವ್ಯಕ್ಕೆ ಬರಬೇಕು ಇದು ಸದ್ಯದ ಎಲ್ಲಾ ಶೇ.೯೦ ಭಾಗ ಎಲ್ಲಾ ಇಲಾಕೆಯ ಸಿಬ್ಬಂದಿಗಳು ಅದರಲ್ಲೂ ಬೇಗನೆ ಓದುಗರ ಕಣ್ಣಿಗೆ ಸಿಗುವ ಗ್ರಂಥಾಲಯ ಸಿಬ್ಬಂದಿಗಳು ತಮ್ಮ ನಿತ್ಯ ಕರ್ತವ್ಯಗಳಲ್ಲಿ ಪಾಲಿಸುತ್ತಿರುವ ಆದರ್ಶಗಳು! ಎಂದರೆ ನಂಬಲೇ ಬೇಕು. ಇದು ಬೇಜವಬ್ದಾರಿ, ಅಪವಿತ್ರ, ಅಜ್ಞಾನಿ, ಅವಿವೇಕತನ, ಸ್ವಾರ್ಥದಿಂದ ಕೂಡಿದ ಕ್ಷೇತ್ರಾಡಳಿತ/ಸ್ಥಳೀಯ ಸರ್ಕಾರಿ ಆಡಳಿತ ವ್ಯವಸ್ಥೆಯ ಇಣುಕು ನೋಟ. ಇಲ್ಲಿನ ಸಿಬ್ಬಂದಿಗಳ ನೇಮಕಾತಿಯನ್ನು ರದ್ದುಪಡಿಸಿ ಸೇವಾ ಮನೋಭಾವವುಳ್ಳ ಸ್ಥಳೀಯ ನಿರುದ್ಯೋಗಿಗಳನ್ನು ಮರುನೇಮಕ ಮಾಡಬೇಕೆನ್ನುವುದು, ಮಾಡಬೇಕಾಗಿರುವುದು ಸದ್ಯಕ್ಕಿರುವ ಪಾರ್ಯಾಯ ಪರಿಹಾರವೆಂದು ಸ್ಥಳೀಯ ಜವಾಬ್ದಾರಿಯುತ ಗ್ರಂಥಾಲಯ ಓದುಗರ ಅಭಿಪ್ರಾಯ.

Thursday, November 18, 2010

ಗುರು ಶಿಷ್ಯರ ಸಾಮೂಹಿಕ ನಾಟಕ ಪ್ರಧರ್ಶನ

ದಿನಾಂಕ ೧೬ ನವೆಂಬರ್ ೨೦೧೦ ರ ಸೋಮವಾರ ಎಂದಿನಂತೆ ಗ್ರಂಥಾಲಯದಲ್ಲಿ ಹಿಂದಿನ ದಿನದ ನಾಲ್ಕೈದು ಪತ್ರಿಕೆಗಳು ಕಾಣಲಿಲ್ಲವಾದ್ದರಿಂದ ಅಂದು ಅಲ್ಲಿದ್ದ ಗ್ರಂಥಪಾಲಕಸಹಾಯಕಿಯವರು ಮತ್ತು ಸೋಮವಾರವಾದ ಕಾರಣ ಗ್ರೂಪ್ ಡಿ ನೌಕರರೂ ಹಾಜರಿದ್ದರು ಕಾಣದಿದ್ದ ಪತ್ರಿಕೆಗಳ ಬಗ್ಗೆ ವಿಚಾರಿಸಿದ್ದಕ್ಕೆ ಹಾಜರಾತಿ ಪುಸ್ತಕ ತೋರಿಸಿ ನೋಡೋಣ ಎಂದಿದ್ದಕ್ಕೆ ,ಪಕ್ಕದ ಕಟ್ಟಡದ ಒಬ್ಬ ಪರಿಚಯಸ್ತರು ತೆಗೆದುಕೊಂಡಿದ್ದಾರೆ ಮತ್ತು ಅವರ ರೂಮಿನ ಬಾಗಿಲು ಇನ್ನೂ ತೆಗೆಯದ ಕಾರಣ ಪತ್ರಿಕೆಗಳನ್ನು ಅವರು ಬಂದ ಮೇಲೆ ವಾಪಸ್ಸು ಪಡೆದು ಓದಲು ನೀಡುತ್ತೇವೆಂದು ತಿಳಿಸಿದರು ಸ್ವಲ್ಪ ಬೇಜಾರಾದ ನಾವು ಅವರಿವರಿಗೆಕೆ ಲೈಬ್ರರಿಯ ಪತ್ರಿಕೆಗಳನ್ನು ನೀಡುತ್ತೀರಿ ಅಥವಾ ತೆಗೆದುಕೊಂಡು ಹೋಗಲು ಅನುಮತಿ ನೀಡಿದ್ದೀರಿ ನಿಮ್ಮಗಳ ತಪ್ಪಿನಿಂದ ನಮ್ಮ ಸಮಯ ಹಾಳಾಗುವುದರ ಜೊತೆಗೆ ಇನ್ನೂ ಸರಿಯಾಗಿ ಕೆಲಸ ನಿರ್ವಹಣೆ ಕಲಿತಿಲ್ಲವೆಂದು ಎಚ್ಚರಿಕೆ ನೀಡಿ ಹೊರ ಹೋದೆವು ಈ ಘಟನೆಯಿಂದ ಕುಪಿತಗೊಂದಿದ್ದ ಸಿಬ್ಬಂದಿಯು ಎಚ್ಚರಿಕೆ ನೀಡಿದ ವ್ಯಕ್ತಿಗೆ ಏನಾದರೂ ನಾವು ತಿರುಗೇಟು ನೀಡಲೇಬೇಕೆಂದು ಪಣತೊಟ್ಟ೦ತಿತ್ತು ಅದಕ್ಕೆಂದೇ ದಿನಾ೦ಕ ೧೭ ನವೆಂಬರ್ ೨೦೧೦ ರಂದು ಬಕ್ರೀದ್ ಹಬ್ಬದ ರಜೆಯಿದ್ದದ್ದರಿಂದ ಈ ದಿನದ ಪತ್ರಿಕೆಗಳನ್ನು ದಿನಾಂಕ ೧೮ ರ೦ದು ಎಂದಿನಂತೆ ಓದುತ್ತಿದ್ದಾಗ ಕಾಣಸಿಗಲಿಲ್ಲದ ದಿನಾಂಕ ೧೭ ರ ಬೇರೆ ಪತ್ರಿಕೆಗಳ ಬಗ್ಗೆ ಕೇಳಿದೆವು, ಆ ಮಹಿಳಾ ಸಿಬ್ಬಂದಿಯು ಆಬ್ಸೆಂಟ್ ಹಾಕಿದ್ದೀವಿ ಹೋಗ್ರಿ ಎಂದರು ಮೊದಲೇ ಸಾರ್ವಜನಿಕರ ನ೦ಬಿಕೆ ಕಳಕೊಂಡಿರುವ ಇವರನ್ನು ಸಂಪೂರ್ಣ ನ೦ಬಲಾಗದೆ೦ದು ಹಾಜರಾತಿ ಪುಸ್ತಕ ತೋರಿಸಲು ಕೇಳಿದೆವು,ಆ ಮಹಿಳಾ ಸಿಬ್ಬಂದಿಯು, ತೋರಿಸಲೋ ಬೇಡವೋ ಎಂಬಂತೆ ಶನ್ನೆಯ ಮೂಲಕ ಗ್ರೂಪ್ ಡಿ ನೌಕರನ ಆಜ್ಞೆ ಕೇಳಿದರು. ಸಾರ್ವಜನಿಕರಿಗೆ ಹಾಜರಾತಿ ಪುಸ್ತಕ ತೋರಿಸುವ ಕಾನೂನು ಇಲ್ಲ ಹಾಗೂ ತೋರಿಸಬಾರದೆಂದು ನಮ್ಮ ಮಂಡ್ಯ ಸಾಹೇಬರು ಹೇಳಿದ್ದಾರೆ ಎಂದು ಇಬ್ಬರೂ ಕ್ಯಾತೆ ತೆಗೆದು ಜಗಳ ತೆಗೆದರು, ನಾವು ತೋರಿಸಲೇ ಬೇಕು ಎಂದು ಪಟ್ಟು ಹಿಡಿದು ಬಂದಿರದ ಪತ್ರಿಕೆಗಳಿಗೆ ಆಬ್ಸೆಂಟ್ ಮಾಡಿಸಿದೆವು ಮೊದಲೇ ನನ್ನ ಮೇಲೆ ಹೆಚ್ಚು ಕುಪಿತಗೊಂಡಿದ್ದ ಗ್ರೂಪ್ ಡಿ ಸಿಬ್ಬಂದಿಯು ಮತ್ತದೇ ತಮ್ಮ ವರಸೆ ತೆಗೆದು ನಾವು ಹಿಂದಿನ ದಿನದ (೧೭ರ)ಪತ್ರಿಕೆಗಳನ್ನು ಓದುತ್ತಿದ್ದ ಸಮಯದಲ್ಲಿ ನಮ್ಮ ಕಣ್ಣಿಗೆ ಸಿಗದ ಹಾಗೆ ಬೇರೆಡೆ ಬಚ್ಚಿಟ್ಟಿದ್ದ, ದಿನಾಂಕ ೧೭ ರ ಕನ್ನಡ ಪ್ರಭ ಪತ್ರಿಕೆಯನ್ನು ' ಆಗಲೇ ಓದಿ ಮುಗಿಸಿ ಇಟ್ಟಿದ್ದ ಪತ್ರಿಕೆಗಳೊಂದಿಗೆ ಯಾರಿಗೂ ಗೊತ್ತಾಗದ ಹಾಗೆ ಉಪಾಯದಿಂದ ಸೇರಿಸಿಬಿಟ್ಟಿದ್ದರು ಎಂಬುದು ಇವರ ಮಾಮೂಲಿ ಚಮತ್ಕಾರಗಳಲೊಂದು.ಹಾಗೂ ತಮಗೆ ಪತ್ರಿಕೆಗಳನ್ನೋದಗಿಸುವ ಪಕ್ಕದ ಕಚೇರಿಯಲ್ಲಿನ ಪತ್ರಿಕಾ ಸರಬರಾಜುಧಾರರೊಬ್ಬರನ್ನು ಕರೆತಂದು ತಾವೇ ಉಪಾಯದಿಂದ ಸೇರಿಸಿದ್ದ ಕನ್ನಡ ಪ್ರಭ ಪತ್ರಿಕೆಯನ್ನು ತೋರಿಸುತ್ತಾ 'ನೋಡಿ ದಿನಾಂಕ ೧೭ ರ ಕನ್ನಡ ಪ್ರಭ ಪತ್ರಿಕೆ ಬಂದಿದೆ ಆದರೂ ಆಬ್ಸೆಂಟ್ ಬೀಳಿಸಿದರು ಎಂದು ಮುಂಚೆಯೇ ಬರೆದುಕೊಂಡಿದ್ದ ಕಥೆಗೆ ನಾಟಕ ಪ್ರದರ್ಶಿಸಿ ಓದುಗರಿಂದ ತಮ್ಮ ಮೇಲೆ ಕನಿಕರ ಬರಿಸಲು ಯಶಸ್ವಿಯೂ ಆದರು ಮತ್ತು "ಟೇಬಲ್ ಕುಟ್ಟಿ ನಮ್ಮನ್ನು ಪ್ರತಿದಿನವೂ ಏನೇನೋ ಪ್ರಶ್ನಿಸುತ್ತಾರೆ "ನೀವೇ ಸಹಾಯ ನೀಡಿ ಎಂದು ನ್ಯಾಯ ಕೂಡ ಒಪ್ಪಿಸಿದರು, ಆ ಏಜೆ೦ಟರು, ಏಕವಚನದಲ್ಲಿ ಮಾತನಾಡಿಸುತ್ತಾರೆ 'ಟೇಬಲ್ ಕುಟ್ಟಿ ನಮ್ಮನ್ನು ಪ್ರಶ್ನಿಸುತ್ತಾರೆ ನಮ್ಮ ಮರ್ಯಾದೆಗೆ ತೊಂದರೆಯಾಗುತ್ತಿದೆ ಎಂದು ಪೊಲೀಸರಿಗೆ ತಿಳಿಸಿ' ಅವರೇ ಬಂದು ಒದ್ದು ಎಳೆದುಕೊಂಡು ಹೋಗುತ್ತಾರೆ ಎಂದು ಸಲಹೆ ನೀಡಿದಕ್ಕೆ ವಿರೋಧ ವ್ಯಕ್ತಪಡಿಸಿದ ನಾವು, ತಕ್ಷಣ ಅಲ್ಲಿ ನೆರೆದಿದ್ದ ಬೇರೆ/ ಇತರೆ ಓದುಗರಿಗೆ ಈ ಸುಳ್ಳಿನ ಬಗ್ಗೆ ನಿಮ್ಮ ಅಭಿಪ್ರಾಯವೇನೆಂದು ಕೇಳಿ, ಸುಳ್ಳು ನ೦ಬಿಸುತ್ತಿದ್ದ ಗ್ರೂಪ್ ಡಿ ಸಿಬ್ಬಂದಿಯ ವಂಚನೆಯನ್ನು ನಿಲ್ಲಿಸಿದ್ದನ್ನರಿತ ಆ ಪತ್ರಿಕಾ ಸರಬರಾಜುಧಾರರು ತಾನೇ ಸಮಸ್ಯೆ ತಂದುಕೊಂಡು ಬಿಟ್ಟೇನೆ೦ದು ಹೆದರಿ ಅಲ್ಲಿಂದ ಜಾಗ ಖಾಲಿ ಮಾಡಿದರು . ಇದರಿಂದ ಉಪಯೋಗವಾದಂತೆ ಕಾಣದ ಆ ಸಿಬ್ಬಂದಿಗಳು ತಾವೇ ಸಾರ್ವಜನಿಕ ಓದುಗರ ಸೋಗಿನಲ್ಲಿ ಕರೆತಂದಿದ್ದ ತಮ್ಮ ತಮ್ಮ ಕಡೆಯ ವ್ಯಕ್ತಿಗಳ ಮುಖಾಂತರ ತಮ್ಮನ್ನು ಪ್ರಶ್ನಿಸುತ್ತಿದ್ದ ವ್ಯಕ್ತಿಗೆ ಬುದ್ದಿ ಹೇಳಿಸಲು ವಿಫಲರಾದರೂ ಕೂಡ. ಇದೆ ರೀತಿ ಗ್ರಂಥಾಲಯದವರ/ದ ಯಾವುದೇ ತಪ್ಪನ್ನು ಕಂಡು ಹಿಡಿದು ನಮಗೆ ಕಿರಿ ಕಿರಿ ಮಾಡಿದರೆ ನಾವೇ ನಿಮ್ಮ ಮೇಲೆ ಪೊಲೀಸರಿಗೆ ದೂರು ನೀಡುತ್ತೇವೆ ಉಷಾರ್ ಎಂದು ಎಚ್ಚರಿಕೆಯನ್ನೂ ನೀಡಿದರು. ಇದು ಗ್ರಂಥಾಲಯದಲ್ಲಿನ ನಿತ್ಯ ಸತ್ಯ .