Wednesday, September 22, 2010
ನವ ತಂತ್ರಜ್ಞಾನವುಳ್ಳ ಸರ್ಕಾರಿ ಕಂಪನಿಗಳಿಂದ ನವೀನ ಶೈಲಿಯ ಬ್ರಷ್ಟಾಚಾರದ ಕರಿನೆರಳು
ಸ್ಪೈಸೆಸ್ ಬೋರ್ಡ್ ಕೊಚ್ಚಿ, ಸಿ -ಡಾಕ್ ಪುಣೆ ಇನ್ನು ಮುಂತಾದ ನವ ತಂತ್ರಜ್ನಾನವನ್ನಳವಡಿಸಿಕೊಂಡಿರುವ ಇನ್ನೂ ಹಲವು ಸರ್ಕಾರಿ ಕಂಪನಿಗಳು, ಅಷ್ಟೇ ಏಕೆ ಪುರಸಭೆ ಕೆ.ಆರ್.ಪೇಟೆಯಂತ ಕೆಲ ಸಾರ್ವಜನಿಕ ವಲಯದ ಸ್ಥಳೀಯ ಸರ್ಕಾರಿ ಸಂಸ್ಥೆಗಳು ಗಣಕೀಕೃತದ ಹೆಸರಿನಲ್ಲಿ ಇಂದು ದಿನ ಪತ್ರಿಕೆಗಳನ್ನೇ ಪ್ರಸ್ತುತ ವಿಧ್ಯಾಮಾನಗಳ ಮಾಹಿತಿಗೆ ಆಧಾರವಾಗಿರಿಸಿಕೊಂಡಿರುವ ಪಟ್ಟಣ ,ಅರೆ ಪಟ್ಟಣ, ಮತ್ತು ಗ್ರಾಮೀಣ ಪ್ರಧೇಶದ ಉದ್ಯೂಗಾಕಾಂಕ್ಷಿಗಳನ್ನು ಕಡೆಗಣಿಸಿ ತಮ್ಮ ಮೇಲೆ ತಾವೇ ಸಂಶಯ ತಂದುಕೊಳ್ಳುತ್ತಿವೆ ತಾಂತ್ರಿಕವಾಗಿ ಮುಂದುವರೆದ ಕೆಲ ಸರ್ಕಾರಿ ಸ೦ಸ್ಥೆಗಳು ಮತ್ತು ಇಂಥಹ ವ್ಯವಸ್ಥೆಯಿಂದಲೂ ಸಹ ಬ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತಿದೆ ಇಂಥಹ ಕಂಪನಿಗಳು ತಾವು ಗಣಕೀಕೃತಗೊಂಡಿರುವ ಉಮ್ಮಸ್ಸಿನಲ್ಲಿ ಪೂರ್ವಗ್ರಹ ಪೀಡಿತವಾಗಿ ಯೋಚಿಸಿ ಇಡೀ ದೇಶವೇ ಗಣಕೀಕೃತಗೊಂಡಿಬಿಟ್ಟಿದೆ ಎಲ್ಲರು ನಮ್ಮ ಸಂಸ್ಥೆ ಗಳ ಉದ್ಯೋಗಗಳ ಹಾಗು ಇತರೆ ಆಗು ಹೋಗುಗಳ ಬಗ್ಗೆ ಅಂತರ್ಜಾಲದಲ್ಲೇ ತಿಳಿಯುವ ಸೌಲಭ್ಯ ಪಡೆದೆ ಇರುತ್ತಾರೆ ನಾವೇಕೆ ಸಂಪೂರ್ಣ ವಿವರದ ಜಾಹಿರಾತನ್ನು ಪತ್ರಿಕೆಗಳಲ್ಲೂ ಹಾಕಿಸುವ ರಿಸ್ಕ್ ತೆಗೆದು ಕೊಳ್ಳೋದು ಎಂಬ ತಪ್ಪು ತಿಳುವಳಿಕೆಯಿಂದೆಲೋ ಏನೋ ತಮ್ಮ ಸಂಸ್ಥೆಗಳಲ್ಲಿನ ವಿವಿಧ ಹುದ್ದೆಗಳ ಬಗ್ಗೆ ಪತ್ರಿಕೆಗಳಲ್ಲಿ ನೆಪ ಮಾತ್ರಕ್ಕೆ ತಿಳಿಸಿ ಹೆಚ್ಚಿನ ವಿವರ ಬೇಕಾದಲ್ಲಿ ಈ ವೆಬ್ಸೈಟ್ ನೋಡಿ ಆ ವೆಬ್ಸೈಟ್ ನೋಡಿ ಎಂದು ಹೇಳಿ ಕೈ ತೊಳೆದು ಕೊಳ್ಳುತ್ತಿವೆ ಮತ್ತು ಅಕಸ್ಹ್ಮಾತ್ ಇಂತಹ ಜಾಹಿರಾತನ್ನು ಯಾರಾದರೂ ಆಶಕ್ತ ನಿರುದ್ಯೋಗಿಗಳು ನೋಡಿ ಸಂಪೂರ್ಣ ವಿವರದ ಸಲುವಾಗಿ ಜಾಹಿರಾತಿನಲ್ಲಿದ್ದ ವೆಬ್ಸೈಟ್ಗಳನ್ನು ಸಂಪರ್ಕಿಸಿದರೆ ಅಲ್ಲಿ ಸಮಯ ಹಾಳಾಗುವುದರ ಜೊತೆಗೆ ತಮ್ಮ ಇ -ಮೇಲ್ ಪೆಟ್ಟಿಗೆಯೊಳಗೆ ವೈರಸ್ ಗಳು ನುಸುಳಲು ಮಾರ್ಗ ಸೂಚಿಸಿದ೦ತಾಗುತ್ತದೆ ಹಾಗು ಸಿಗುವ ಮಾಹಿತಿ ಕೇವಲ ಶೂನ್ಯ ಏಕೆಂದರೆ ಇಂಥಹ ವೆಬ್ಸೈಟ್ ಗಳ ಉಸ್ತುವಾರಿಕೆಗೆ ನೇಮಕಗೊಂಡಿರುವ ಸಿಬ್ಬಂದಿಗಳು ಸರಿಯಾಗಿ ಉಸ್ತುವಾರಿ ನೋಡಿಕೊಳ್ಳದೆ ಆ ವೆಬ್ಸೈಟ್ಗಳು ಕಂಪ್ಯೂಟರ್ ವೈರಸ್ ಗಳ ತಾಣವಾಗಿರುತ್ತವೆ ಅಥವಾ ಆ ಉಸ್ತುದಾರಿ ನೋಡಿಕೊಳ್ಳುವವರಿಗೆ ತಮ್ಮ ಸಂಸ್ಥೆಯಲ್ಲಿನ ಹುದ್ದೆಗಳ ಜಾಹಿರಾತಿನ ಬಗ್ಗೆ ತಿಳಿದೇ ಇರುವುದಿಲ್ಲ ಇವರಿಗೆ ಕೆಲವೊಮ್ಮೆ ಕರೆ ಮಾಡಿದ ನಿರುದ್ಯೋಗಿಗಳಿಂದ ತಿಳಿಯುವುದುಂಟು. ಇನ್ನೂ ಕೆಲ ವೆಬ್ಸೈಟ್ ಗಳಲ್ಲಿ ಹುದ್ದೆ ಗಳ ಸಂಪೂರ್ಣ ಮಾಹಿತಿ ಸಿಗುವ ಪೇಜ್ ಡೌನ್ಲೋಡ್ ಮಾಡಿಕೊಳ್ಳಲು ನಿರುದ್ಯೋಗಿ ಆಶಕ್ತರಿಗೆ ಆಗುವುದೇ ಇಲ್ಲ ಕೆಲವೊಮ್ಮೆ ತ್ರಾಸಧಾಯಕವಾಗುವ ಹಾಗೆ ಅಥವಾ ಶ್ರಮಧಾಯಕವಾಗುವ ಹಾಗೆ ಕಷ್ಟಕರ ರೀತಿಯಲ್ಲಿ ತ೦ತ್ರಾ೦ಶ ಅಭಿವೃದ್ದಿ ಪಡಿಸಿರಲೂ ಬಹುದು ಇದು ಕೆಲ ಸಂಸ್ಥೆಗಳಲ್ಲಿ ನಿಜವಾಗಿರುತ್ತದೆ ಕೂಡ ಈ ರೀತಿಯ ದೋಷಗಳಿಂದ ಆಶಕ್ತರು ನಿರುತ್ಸಾಹ ತೋರಿ ಕೆಲಸಕ್ಕೆ ಕನಿಷ್ಠ ಪಕ್ಷ ಅರ್ಜಿ ಹಾಕುವ ದೈರ್ಯದಿಂದ ಹಿಂದೆ ಸರಿಯುವುದರಿಂದ ಆಯಾ ಸಂಸ್ಥೆಗಳ ಉದ್ಯೋಗಿಗಳ ಕಡೆಯಿಂದ ಈ ಬಗ್ಗೆ ವಿಷಯ ತಿಳಿದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪೈಪೋಟಿ ಕಡಿಮೆಯಾಗಿ ಹೆಚ್ಚು ಹುದ್ದೆಗಳಿಗೆ ಹಾಲಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರ ಪರಿಚಯಸ್ತರು /ಸ೦ಭ೦ಧಿಕರು ಆಯ್ಕೆಯಾಗುವ ಸಾಧ್ಯತೆಗಳಿರುತ್ತವೆ ಮತ್ತು ಇಂಥಹ ಘಟನೆಗಳಿಂದ ಬ್ರಷ್ಟಾಚಾರ ನಡೆದಿರುವ ಸಂಭವವಿರುತ್ತದೆ. ಸಾಮಾನ್ಯವಾಗಿ ಇಂಥಹ ದುರುದ್ಧೇಶಪೂರಿತ ವೆಬ್ ಸಮಸ್ಯೆಗಳಿಗೆಲ್ಲಾ ಹಿಂದಿರುವ ಉದ್ದೇಶವೇ ಬ್ರಷ್ಟತೆ ಅಥವಾ ಬ್ರಷ್ಟಾಚಾರವೆಸಗುವುದಾಗಿರುತ್ತದೆ .ಇತ್ತೇಚೆಗೆ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಅಪಾರಧರ್ಶಕತೆ ಪ್ರದರ್ಶಿಸಿ ಇದರ ಬಗ್ಗೆಯೂ ಅನುಮಾನವನ್ನು ಪಡುವ ಹಾಗೆ ಮಾಡಿಕೊಂಡ ಮತ್ತೊಂದು ಮಹತ್ತರ ಸಂಸ್ಥೆಯೇ ಏರ್ ಫೋರ್ಸ್ ಸ್ಕೂಲ್ ಹೆಬ್ಬಾಳ ಬೆಂಗಳೂರು.
ಈ ಯಮ್ಮ ಲೈಬ್ರರಿಗೆ ಬರೋದು ಟೈಮ್ ಪಾಸ್ ಮಾಡುವುದಕ್ಕಂತೆ!
ದಿನಾಂಕ ೩೦ ಜೂನ್ ೨೦೧೦ ರಂದು ಇದ್ದಕ್ಕಿದ್ದ೦ತೆಯೆ ಒಬ್ಬ ಮಹಿಳಾ ಸಿಬ್ಬಂದಿ ಕೆ.ಆರ್. ಪೇಟೆಯ ಗ್ರಂಥಾಲಯದಲ್ಲಿ ಸದ್ದಿಲ್ಲದೇ ವಕ್ಕರಿಸಿದರು ಇವರ ಬಗ್ಗೆ ಓದುಗರಿಗೆ ಪರಿಚಯ ಮಾಡಿಕೊಡುವ ಗೋಜಲಿಗೆ ಸದ್ಯದ ಗ್ರಂಥ ಪಾಲಕರು ಹೋಗಲೇ ಇಲ್ಲ ಸಾರ್ವಜನಿಕರು ಕೇಳಿದರೂ ಕೂಡ ಆ ಮಹಿಳೆಯೂ ತಿಳಿಸುವ ಕೆಲಸಕ್ಕೆ ಕೈ ಹಾಕಿಲ್ಲ ಏನೇ ಇರಲಿ ಇವರು ಹೊಸದಾಗಿ ಬಂದಿರೋ ಸಿಬ್ಬಂದಿಯ ಕಾರ್ಬಾರ್ ನೋಡ್ತಾ ಇದ್ರೆ ಸಹಾಯಕ ಗ್ರಂಥಪಾಲಕಿಯಾಗಿರಬಹುದೇನೋ ಎಂದೆನಿಸುತ್ತದೆ. ಆದರೂ ಈ ಯಮ್ಮ೦ದೂ ಅದೇ ಗೋಳು, ಕೆಲಸ ಸರಿಯಾಗಿ ಮಾಡೋಲ್ಲಾ ಬಂದಿರದ ಪತ್ರಿಕೆಗಳ ಬಗ್ಗೆ ವಿಚಾರಿಸಿದರೆ ಯಾರೋ ಓದೋಕ್ ಬರೋರು ತೆಗೆದುಕೊಂಡು ಹೋಗಿರಬಹುದೆಂದು ಸಲೀಸಾಗಿ ಬೇಜವ್ಬಾರಿ ಜವಾಬ್ ಕೊಡೋದನ್ನ ಪ್ರಾಕ್ಟಿಸ್ ಮಾಡ್ತಾ ಇದ್ದಾರೆ. ಇವರು ಇಲ್ಲಿಗೆ ಬರೋ ಸೂಚನೆ ಇರಲಿಲ್ಲ ಎಲ್ಲಾ ನಮ್ಮ ಹಿಂದಿನ ಅಂದರೆ ಏಪ್ರಿಲ್ ತಿಂಗಳ ಸುದ್ದಿಯ ಮಹಿಮೆ ನೋಡಿ ಎಲ್ಲಿ ನಮ್ಮ ಓದುಗರು ತಾನು(ಗ್ರಂಥ ಪಾಲಕರು ) ಎಲ್ಲಿಗೆ ಬೇಕೋ ಅಲ್ಲಿಗೆ ಹೇಳ್ದೆ ಕೇಳ್ದೆ ಹೋಗೋದನ್ನ ಪ್ರಶ್ನಿಶ್ತಾರೋ ಎಂದು ತನಗೊಬ್ಬರು ಸಹಾಯಕರಿಗೆ ಶಿಫಾರಸ್ಸು ಮಾಡಿರಬಹುದೇನೋ ಅದಕ್ಕೆ ಈ ಯಮ್ಮ ಬಂದಿದ್ದಾರೆ ಈ ಯಮ್ಮನಿಗೆ ಲೈಬ್ರರಿಯ ಟೈಮಿಂಗ್ಸ್ ಹೇಳಿ ನೋಡೋಣವೆಂದರೆ ಬೋರ್ಡ್ ನೋಡಿಕೊಂಡು ಹೇಳೋ ಈ ಯಮ್ಮ ಹಿಂದೆ ಬೇರೆಲ್ಲೋ ಕೆಲಸ ಮಾಡಿ ಇಲ್ಲಿಗೆ ವರ್ಗಾವಣೆ ಆಗಿದ್ದಾರೆ ಎಂದರೆ ಖಂಡಿತ ಯಾರು ನ೦ಬುವುದಿಲ್ಲಾ ಏಕೆಂದರೆ ಈ ಯಮ್ಮನಿಗೂ ಕೂಡ ಗ್ರಂಥಾಲಯ ಕೆಲಸದ ಅ ಆ ಇ ಈ ಗೊತ್ತಿಲ್ಲಾ ಎಂದು ಆಗಲೇ ಎಲ್ಲರಿಗೂ ಗೊತ್ತಿರೋ ವಿಷಯ. ಅಕಸ್ಮಾತ್ ಹೊಸ ನೇಮಕಾತಿಯಾಗಿದ್ದರೆ ಇದು ೯೯% ಲೇಟೆಸ್ಟ್ ಅಕ್ರಮ ನೇಮಕಾತಿಯಾಗಿರುತ್ತದೆ ಏಕೆಂದರೆ ಗ್ರಂಥಾಲಯ ಇಲಾಕೆಯಿ೦ದ ಯಾವಾಗ ಸಾರ್ವಜನಿಕ ಜಾಹಿರಾತು ನೀಡಿದ್ದರು ತೋರಿಸಲಿ ನೋಡೋಣ? ನೆನ್ನೆ ಕನ್ನಡ ಪ್ರಭ ಪತ್ರಿಕೆಯಲ್ಲಿ ಕೂಡ ಗ್ರಂಥಾಲಯದ ನೇಮಕಾತಿಗಳ ಬಗ್ಗೆ ಪ್ರಕಟಿಸಿರುವ ವರದಿಯನ್ನು ಕಣ್ಣಾಡಿಸಿದರೆ ಇಲ್ಲಿನ ಹೆಚ್ಚು ನೆಮಕಾತಿಗಳೆಲ್ಲಾ ಅಕ್ರಮಗಳೆ ಎನ್ನುವುದನ್ನ ನ೦ಬಲೆಬೇಕು. ನಾನ್ ಹೆಂಗ್ಸು ಮನೆಗೆ ಬೇಗ ಹೋಗ್ಬೇಕು ಬೇಗ ಬಾಗಿಲು ಹಾಕ್ಬೇಕು ದಯವಿಟ್ಟು ಹೋಗಿ ಎಂದು ಸಾರ್ವಜನಿಕರನ್ನ ಕೇಳೋದು, ಒಬ್ಬರೋ ಇಬ್ಬರೋ ಯಾಕೆ ಹಿಂಗೆ ? ೮ ಗಂಟೆವರೆಗೂ ಇರಬೇಕು ಕಂಡ್ರಿ ಅಂತಂದ್ರೆ ೭ /೭:೩೦ ರವರೆಗೆ ಮಾತ್ರ ಇರ್ತೇವೆ ಅದೂ ಕರೆಂಟ್ ಸೌಲಭ್ಯ ಬಂದ್ರೆ ಇಲ್ಲಾಂದ್ರೆ ನಿಮ್ಮ ಪಾಡು ಅಲ್ಲಿವರೆಗೂ ನನ್ನ ಬೇಗ ಮನೆಗೆ ಕಳಿಸಿ ನನಗೂ ಗಂಡ ಮಕ್ಳು ಅವ್ರೆ ಎಂದು ಬಂದ ಪ್ರಾರಂಭದ ದಿನಗಳಲ್ಲಿ ನಯವಾಗಿ ಉತ್ತರಿಸುತ್ತಿದ್ದ ಈ ಯಮ್ಮ ಬರು ಬರುತ್ತಾ ಸಾಯಂಕಾಲದ ಹೊತ್ತಿನಲ್ಲಿ ಸಾರ್ವಜನಿಕರಿಗೆ ವಯಕ್ತಿಕವಾಗಿ ಭಯವೊಡ್ಡಿ ಅವರು ಮನೆಗೆ ಹೊರಡಲು ಮಾನಸಿಕ ಒತ್ತಡ ತರುವುದೇ ಈ ಹೊಸ ಯಮ್ಮನ ಕಾಯಕವಾಗಿದೆಯಂತೆ (ಸಾರ್ವಜನಿಕರು ಗುಂಪಿನಲ್ಲಿ ಓದುತ್ತಿದ್ದಾಗ ರಿಕ್ವೆಸ್ಟ್ ಮೂಲಕ ಬಾಗಿಲು ಮುಚ್ಚಲು ಅನುಮತಿ ಕೇಳುವ ಈ ಯಮ್ಮ , ಕೊನೆಯಲ್ಲಿ ಒಬ್ಬೊಬ್ಬರೇ ಸಿಕ್ಕಿದರೆ ಶುರು ಮಾಡುತ್ತಾರೆ ಬೈಗುಳದ ಮಾತುಗಳನ್ನು. ಬೆಳಿಗ್ಗೆ ಹೊತ್ತು ಗೌರಮ್ಮನ ಗೆಟಪ್ನಲ್ಲಿ ಪೋಜ್ ಕೊಡೊ ಈ ಯಮ್ಮ ಸಂಜೆ ವೇಳೆ ತನ್ನ ಸೋಮಾರಿತನವನ್ನು ದೂಷಿಸುವ ಪ್ರಾಮಾಣಿಕ ಸೇವಾ ಮನೋಭಾವವುಳ್ಳ ಓದುಗರು ಏನಾದರೂ ಒಬ್ಬರೇ ಓದುತ್ತಾ ಉಳಿದರೆ/ಸಿಕ್ಕಿದರೆ ಅದರಲ್ಲೂ ತನ್ನನ್ನು ಪ್ರಶ್ನಿಸುವ೦ಥವರು ಏನಾದರೂ ಕೊನೆಯಲ್ಲಿ ಓದುತ್ತಾ ಒಂಟಿ ಕುಳಿತಿದ್ದರೆ ಶುರು ಮಾಡುತ್ತಾಳೆ ತನ್ನ ಫೋನ್ ಮಾಡುವ ನೆಪದಲ್ಲಿ ಓದುಗರನ್ನು ಬೈಯ್ಯುವುದು ಹೇಗೆಂದರೆ "ರೀ ಎಲ್ಲಿದ್ದೀರಿ ಲೈಬ್ರರಿ ಹತ್ರ ಬನ್ನಿ, ಒಂದು ಗೂಬೆ ಇನ್ನು ಓದುತ್ತಾ ಕುಂತೈತೆ ಅದು ಸುಮ್ಮನೆ ಹೊರ ಹೋಗುವುದಿಲ್ಲವಲ್ಲ ಅದಕ್ಕೆ ಮನೆಗೆ ಬರೋದ್ ಲೇಟ್ ಹಾಗಂಗಿದೆ ಎಷ್ಟಾದರೂ ಹಠಮಾರಿ ಗೂಬೆ ಅಲ್ವೇ ಅದು, ನೀವು ಇಲ್ಲಿಗೆ ಬಂದ್ ನೀವೊಂದ್ಸಾರಿ ಹೇಳಿ ಗೂಬೆಗೆ' ಕೇಳುತ್ತೋ ಏನೋ ನೋಡೋಣ" (ಈ ಯಮ್ಮನ ಯಜಮಾನರು ಬಂದು) "ನಿನಗೆ ಬೆಲೆ ಕೊಡೊಲ್ಲಾ ಎಂದರೆ ನನ್ನ ಮಾತು ಕೇಳುತ್ತಾ? ಇರು ಈ ಗೂಬೆ ಕಳಿಸೋಕೆ ನಮ್ಮ ಪಕ್ಕದ ಕಚೇರಿಯಯವರನ್ನು ಸಲಹೆ ಕೇಳೋಣ ಎಂದು ತಾವೇ ತೀರ್ಮಾನಿಸಿ ಸಲಹೆ ಕೇಳಿ ಬಂದು ನಂತರ ಮಾತನಾಡಿದ ಮಾತುಗಳು ನಿಜಕ್ಕೂ ಓದುಗರು ಖಂಡಿಸುವಂತ ಮಾತುಗಳು ಅವುಗಳೇನೆಂದರೆ "ನಿಂದು ಜಾಸ್ತಿ ಆಯಿತು ಬೇರೆಯವರೆಲ್ಲಾ ೬-೬:೧೫ ಕ್ಕೆ ಹೊಂಟೋಗಲ್ವಾ? ಬೆಳಿಗ್ಗೆ ಹೊತ್ತು ಅದಿಲ್ಲಾ ಇದಿಲ್ಲಾ ಅಂತ ತಲೆ ತಿಂತೀಯಾ, ಇಲ್ಲಿ ಇಷ್ಟೊತ್ತಿನಲ್ಲಿ ಪೇಪರ್ ಇಡ್ಕೋ೦ಡು ಸುಮ್ನೆ ಕೂತ್ಕೊತೀಯಲ್ಲಾ ಗೊತ್ತಾಗೊಕಿಲ್ವಾ ?" ನನಗೇನೋ.. ನೀನು' ಬೇಕು ಬೇಕು ಅಂತಲೇ ಕೂತ್ಕೊತೀಯಾ ಅನ್ಸುತ್ತೆ ,ನಂಗೆ ಗೊತ್ತಾಗೊಲ್ವ ನಿನ್ ಪ್ಲಾನು, ಇವತ್ತೇ ಲಾಸ್ಟು ಇನ್ನೊಂದಿವ್ಸ ೬ ಗಂಟೆ ಮೇಲೆ ಇಲ್ಲಿ ಕೂತ್ಕೊಂಡು ಇರೋದ್ ಕಂಡ್ರೆ ಕೂಕಬುಡ್ತೀನಿ" ಜೊತೆಗೆ ರಾತ್ರಿ ೯ ಗಂಟೆಗ೦ಟ ಮನೆಗೆ ಹೋಗಬೇಡಾ ,ಲೈಬ್ರರಿ ಬಾಗಿಲು ಮುಚ್ಚಬೇಡ ಇಲ್ಲೇ ಇರು ಅಂತ ಹಿಂಸೆ ಕೊಡ್ತಾನೆ ಅಂತ ಜನರ ಕರ್ದು ಒಪ್ಪಿಸ್ತೀನಿ' ಆಮೇಲೆ ಎನೈತದೆ ಅಂತ ನಿಂಗೆ ಗೊತ್ತೈತಲ್ಲಾ, ಇವರಪ್ಪನ ಮನೆಯಿಂದ ಸಂಬಳ ಕೊಡುಸುತ್ತಿರೋನಂಗೆ ಕೂತ್ಕೊಂಡುಬಿಡ್ತಾನೆ, ಕರೆಂಟ್ ಬೇರೆ ಮೊದ್ಲೇ ಇಲ್ಲಾ ಲೈಬ್ರರಿಲಿ . ಇನ್ನು ಇಲ್ಲೇ ಇದ್ರೆ ಕೂಡಿ ಹಾಕಿ ಬೀಗ ಹಾಕ್ಕೊಂಡು ಹೊಂಟೋಯ್ತೀನಿ " ಎಂದು ಒಂದಿನ ಗುಟುರು ಹಾಕಿದ್ದನ್ನು ಕಂಡು ಈ ಯಮ್ಮನ ಅಸಲಿ ಅವತಾರ ನೋಡಿ ಸ್ವಲ್ಪ ಭಯವು ಉಂಟಾಯಿತು. ಓದುಗರು ಒಬ್ಬರಿಗಿಂತ ಹೆಚ್ಚಿದ್ದರೆ ಈ ಯಮ್ಮ ತನ್ನ ವರಸೆ ತೋರುವುದು ವಿರಳವಾದರೂ ಕೆಲವರಂತೂ ಈ ಯಮ್ಮ ಸಂಜೆ ವೇಳೆ ಗ್ರಂಥಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದರೆ ಸಾಕು ನೋಡಿ ವಾಪಸ್ಸು ಮನೆ ಕಡೆ ಹೊರಡುವ ಸ್ಥಿತಿಯಿದೆ. ಈಗ ಸಂಜೆವೇಳೆ ಕರ್ತವ್ಯ ನಿರ್ವಹಿಸುವ ಸಂಧರ್ಭ ಬಂದರೆ ತಮ್ಮ ಯಜಮಾನರನ್ನು ಜೊತೆ ಕರೆತರುತಾದರೂ ಅಷ್ಟೇ ಬೇಗನೆ ಹೊರಟುಬಿಡುತ್ತಾರೆ. ಅಂದ ಹಾಗೆ ಈ ಲೈಬ್ರರಿ ಕರೆಂಟ್ ಬಗ್ಗೆ ಲೇಟೆಸ್ಟ್ ಸುದ್ದಿಯೆಂದರೆ ಈ ಗ್ರಂಥಾಲಯದ ಮೀಟರ್ ಬೋರ್ಡ್ ಪಕ್ಕದಲ್ಲಿರುವ ಖಾಸಾಗಿ ಪತ್ರಿಕಾ ಕಾರ್ಯಕರ್ತರ ಸ೦ಸ್ಥೆ ಯಲ್ಲಿದೆಯಂತೆ!, ವಿದ್ಯುತ್ ಸೌಲಭ್ಯವಿಲ್ಲದ ಈ ಗ್ರಂಥಾಲಯಕ್ಕೆ ಬಿಲ್ಲಂತೂ ತಪ್ಪದೆ ಬರುತ್ತಂತೆ! ಮುನ್ಸಿಪಾಲಿಟಿ ಚೀಫ್ ಆಫೀಸೆರ್ ಹೆಸರಿಗೆ ನೀಡುತ್ತಿರುವ ಕೆ ಆರ್ ಪಿ ಸಿ ಎಲ್ ೬೦೭ ನ೦ಬರಿನ ವಿದ್ಯುತ್ ಬಿಲ್ಲನ್ನು ಅರ್ಧ ಗ್ರಂಥಾಲಯ ಇಲಾಕೆ ಬರಿಸುತ್ತಂತೆ! ೧೩ ಸೆಪ್ಟೆಂಬರ್ ೨೦೧೦ ದಿನಾಂಕವಿದ್ದ ಬಿಲ್ ಬಂದದ್ದನ್ನು ಕಂಡ ಗ್ರಂಥಾಲಯ ಓದುಗರು ಪ್ರಶ್ನಿಸಿದ್ದಕ್ಕೆ ಈ ರೀತಿಯಾಗಿ ಆ ದಿನ ಗ್ರಂಥಾಲಯದಲ್ಲಿದ್ದ ಅಲ್ಲಿನ ಕೇವಲ ಪ್ರಮುಖ ದಿನಗಳಲ್ಲಿ ಅಧಿಕಾರಿಗಳ ಆಧೆಶಕ್ಕನುಗುಣವಾಗಿ ಗ್ರಂಥಾಲಯದಲ್ಲಿ ಪ್ರತ್ಯಕ್ಷವಾಗುವ ಹಂಗಾಮಿ ಗ್ರೂಪ್ 'ಡಿ' ಸಿಬ್ಬಂದಿಯೊಬ್ಬರು ತನಗೆ ಉದ್ಯೋಗ ಭರ್ತಿ ಸಿಕ್ಕಿಲ್ಲದಿದ್ದರೂ ನನಗಿಂತಲೂ ನಂತರ ಬಂದ ಅಂದರೆ ಇತ್ತೀಚಿನ ಕೆಲ ದಿನಗಳಲ್ಲಿ ಬಂದ ಮಹಿಳಾ ಸಿಬ್ಬಂದಿ ಆರಾಮಾಗಿ ಕುಳಿತುಕೊಳ್ಳುತ್ತಾರೆ ಹಾಗೂ ನನಗೆ ಉತ್ತಮ ಸಂಬಳವೂ ಸಿಗುತ್ತಿಲ್ಲ ಎಂದು ಆಪಾಧಿಸುತ್ತಾ ವಿದ್ಯುತ್ಪಕ್ತಿ ಕಥೆಯನ್ನು ತಮ್ಮ ಓದುಗ ಸ್ನೇಹಿತರೊಬ್ಬರಿಗೆ ವಿವರಿಸುತ್ತಿರುವಾಗ ಬೇರೆ ಓದುಗರಿಗೂ ವಿಷಯ ತಿಳಿಯಿತು.ಅಕ್ರಮ ವೈದ್ಯಕೀಯ ನೇಮಕಾತಿಗಳಂತೆ ಅಕ್ರಮ ಗ್ರಂಥಾಲಯ ನೇಮಕಾತಿ ತನಿಖೆ ಮಾಡಿದರೆ ನಿಜಕ್ಕೂ ಅಕ್ರಮಗಳ ಸರಮಾಲೆಗಳೇ ಸಿಗಲಿವೆ. ಈ ಬಗ್ಗೆ ಕ್ರಮ ಕೈಗೊಂಡು ಅವಶ್ಯಕತೆಯಿರುವ ಬಡ ನಿರುದ್ಯೋಗಿಗಳಿಗೆ ನ್ಯಾಯ ಒದಗಿಸಿ ಕೊಡಬೇಕಾಗಿ ಸಂಭಂದ ಪಟ್ಟವರಿಗೆ ನಮ್ಮ ನಯವಾದ ರಿಕ್ವೆಸ್ಟ್.
Subscribe to:
Posts (Atom)
