Wednesday, September 22, 2010

ನವ ತಂತ್ರಜ್ಞಾನವುಳ್ಳ ಸರ್ಕಾರಿ ಕಂಪನಿಗಳಿಂದ ನವೀನ ಶೈಲಿಯ ಬ್ರಷ್ಟಾಚಾರದ ಕರಿನೆರಳು

ಸ್ಪೈಸೆಸ್ ಬೋರ್ಡ್ ಕೊಚ್ಚಿ, ಸಿ -ಡಾಕ್ ಪುಣೆ ಇನ್ನು ಮುಂತಾದ ನವ ತಂತ್ರಜ್ನಾನವನ್ನಳವಡಿಸಿಕೊಂಡಿರುವ ಇನ್ನೂ ಹಲವು ಸರ್ಕಾರಿ ಕಂಪನಿಗಳು, ಅಷ್ಟೇ ಏಕೆ ಪುರಸಭೆ ಕೆ.ಆರ್.ಪೇಟೆಯಂತ ಕೆಲ ಸಾರ್ವಜನಿಕ ವಲಯದ ಸ್ಥಳೀಯ ಸರ್ಕಾರಿ ಸಂಸ್ಥೆಗಳು ಗಣಕೀಕೃತದ ಹೆಸರಿನಲ್ಲಿ ಇಂದು ದಿನ ಪತ್ರಿಕೆಗಳನ್ನೇ ಪ್ರಸ್ತುತ ವಿಧ್ಯಾಮಾನಗಳ ಮಾಹಿತಿಗೆ ಆಧಾರವಾಗಿರಿಸಿಕೊಂಡಿರುವ ಪಟ್ಟಣ ,ಅರೆ ಪಟ್ಟಣ, ಮತ್ತು ಗ್ರಾಮೀಣ ಪ್ರಧೇಶದ ಉದ್ಯೂಗಾಕಾಂಕ್ಷಿಗಳನ್ನು ಕಡೆಗಣಿಸಿ ತಮ್ಮ ಮೇಲೆ ತಾವೇ ಸಂಶಯ ತಂದುಕೊಳ್ಳುತ್ತಿವೆ ತಾಂತ್ರಿಕವಾಗಿ ಮುಂದುವರೆದ ಕೆಲ ಸರ್ಕಾರಿ ಸ೦ಸ್ಥೆಗಳು ಮತ್ತು ಇಂಥಹ ವ್ಯವಸ್ಥೆಯಿಂದಲೂ ಸಹ ಬ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತಿದೆ ಇಂಥಹ ಕಂಪನಿಗಳು ತಾವು ಗಣಕೀಕೃತಗೊಂಡಿರುವ ಉಮ್ಮಸ್ಸಿನಲ್ಲಿ ಪೂರ್ವಗ್ರಹ ಪೀಡಿತವಾಗಿ ಯೋಚಿಸಿ ಇಡೀ ದೇಶವೇ ಗಣಕೀಕೃತಗೊಂಡಿಬಿಟ್ಟಿದೆ ಎಲ್ಲರು ನಮ್ಮ ಸಂಸ್ಥೆ ಗಳ ಉದ್ಯೋಗಗಳ ಹಾಗು ಇತರೆ ಆಗು ಹೋಗುಗಳ ಬಗ್ಗೆ ಅಂತರ್ಜಾಲದಲ್ಲೇ ತಿಳಿಯುವ ಸೌಲಭ್ಯ ಪಡೆದೆ ಇರುತ್ತಾರೆ ನಾವೇಕೆ ಸಂಪೂರ್ಣ ವಿವರದ ಜಾಹಿರಾತನ್ನು ಪತ್ರಿಕೆಗಳಲ್ಲೂ ಹಾಕಿಸುವ ರಿಸ್ಕ್ ತೆಗೆದು ಕೊಳ್ಳೋದು ಎಂಬ ತಪ್ಪು ತಿಳುವಳಿಕೆಯಿಂದೆಲೋ ಏನೋ ತಮ್ಮ ಸಂಸ್ಥೆಗಳಲ್ಲಿನ ವಿವಿಧ ಹುದ್ದೆಗಳ ಬಗ್ಗೆ ಪತ್ರಿಕೆಗಳಲ್ಲಿ ನೆಪ ಮಾತ್ರಕ್ಕೆ ತಿಳಿಸಿ ಹೆಚ್ಚಿನ ವಿವರ ಬೇಕಾದಲ್ಲಿ ಈ ವೆಬ್ಸೈಟ್ ನೋಡಿ ಆ ವೆಬ್ಸೈಟ್ ನೋಡಿ ಎಂದು ಹೇಳಿ ಕೈ ತೊಳೆದು ಕೊಳ್ಳುತ್ತಿವೆ ಮತ್ತು ಅಕಸ್ಹ್ಮಾತ್ ಇಂತಹ ಜಾಹಿರಾತನ್ನು ಯಾರಾದರೂ ಆಶಕ್ತ ನಿರುದ್ಯೋಗಿಗಳು ನೋಡಿ ಸಂಪೂರ್ಣ ವಿವರದ ಸಲುವಾಗಿ ಜಾಹಿರಾತಿನಲ್ಲಿದ್ದ ವೆಬ್ಸೈಟ್ಗಳನ್ನು ಸಂಪರ್ಕಿಸಿದರೆ ಅಲ್ಲಿ ಸಮಯ ಹಾಳಾಗುವುದರ ಜೊತೆಗೆ ತಮ್ಮ ಇ -ಮೇಲ್ ಪೆಟ್ಟಿಗೆಯೊಳಗೆ ವೈರಸ್ ಗಳು ನುಸುಳಲು ಮಾರ್ಗ ಸೂಚಿಸಿದ೦ತಾಗುತ್ತದೆ ಹಾಗು ಸಿಗುವ ಮಾಹಿತಿ ಕೇವಲ ಶೂನ್ಯ ಏಕೆಂದರೆ ಇಂಥಹ ವೆಬ್ಸೈಟ್ ಗಳ ಉಸ್ತುವಾರಿಕೆಗೆ ನೇಮಕಗೊಂಡಿರುವ ಸಿಬ್ಬಂದಿಗಳು ಸರಿಯಾಗಿ ಉಸ್ತುವಾರಿ ನೋಡಿಕೊಳ್ಳದೆ ಆ ವೆಬ್ಸೈಟ್ಗಳು ಕಂಪ್ಯೂಟರ್ ವೈರಸ್ ಗಳ ತಾಣವಾಗಿರುತ್ತವೆ ಅಥವಾ ಆ ಉಸ್ತುದಾರಿ ನೋಡಿಕೊಳ್ಳುವವರಿಗೆ ತಮ್ಮ ಸಂಸ್ಥೆಯಲ್ಲಿನ ಹುದ್ದೆಗಳ ಜಾಹಿರಾತಿನ ಬಗ್ಗೆ ತಿಳಿದೇ ಇರುವುದಿಲ್ಲ ಇವರಿಗೆ ಕೆಲವೊಮ್ಮೆ ಕರೆ ಮಾಡಿದ ನಿರುದ್ಯೋಗಿಗಳಿಂದ ತಿಳಿಯುವುದುಂಟು. ಇನ್ನೂ ಕೆಲ ವೆಬ್ಸೈಟ್ ಗಳಲ್ಲಿ ಹುದ್ದೆ ಗಳ ಸಂಪೂರ್ಣ ಮಾಹಿತಿ ಸಿಗುವ ಪೇಜ್ ಡೌನ್ಲೋಡ್ ಮಾಡಿಕೊಳ್ಳಲು ನಿರುದ್ಯೋಗಿ ಆಶಕ್ತರಿಗೆ ಆಗುವುದೇ ಇಲ್ಲ ಕೆಲವೊಮ್ಮೆ ತ್ರಾಸಧಾಯಕವಾಗುವ ಹಾಗೆ ಅಥವಾ ಶ್ರಮಧಾಯಕವಾಗುವ ಹಾಗೆ ಕಷ್ಟಕರ ರೀತಿಯಲ್ಲಿ ತ೦ತ್ರಾ೦ಶ ಅಭಿವೃದ್ದಿ ಪಡಿಸಿರಲೂ ಬಹುದು ಇದು ಕೆಲ ಸಂಸ್ಥೆಗಳಲ್ಲಿ ನಿಜವಾಗಿರುತ್ತದೆ ಕೂಡ ಈ ರೀತಿಯ ದೋಷಗಳಿಂದ ಆಶಕ್ತರು ನಿರುತ್ಸಾಹ ತೋರಿ ಕೆಲಸಕ್ಕೆ ಕನಿಷ್ಠ ಪಕ್ಷ ಅರ್ಜಿ ಹಾಕುವ ದೈರ್ಯದಿಂದ ಹಿಂದೆ ಸರಿಯುವುದರಿಂದ ಆಯಾ ಸಂಸ್ಥೆಗಳ ಉದ್ಯೋಗಿಗಳ ಕಡೆಯಿಂದ ಈ ಬಗ್ಗೆ ವಿಷಯ ತಿಳಿದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪೈಪೋಟಿ ಕಡಿಮೆಯಾಗಿ ಹೆಚ್ಚು ಹುದ್ದೆಗಳಿಗೆ ಹಾಲಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರ ಪರಿಚಯಸ್ತರು /ಸ೦ಭ೦ಧಿಕರು ಆಯ್ಕೆಯಾಗುವ ಸಾಧ್ಯತೆಗಳಿರುತ್ತವೆ ಮತ್ತು ಇಂಥಹ ಘಟನೆಗಳಿಂದ ಬ್ರಷ್ಟಾಚಾರ ನಡೆದಿರುವ ಸಂಭವವಿರುತ್ತದೆ. ಸಾಮಾನ್ಯವಾಗಿ ಇಂಥಹ ದುರುದ್ಧೇಶಪೂರಿತ ವೆಬ್ ಸಮಸ್ಯೆಗಳಿಗೆಲ್ಲಾ ಹಿಂದಿರುವ ಉದ್ದೇಶವೇ ಬ್ರಷ್ಟತೆ ಅಥವಾ ಬ್ರಷ್ಟಾಚಾರವೆಸಗುವುದಾಗಿರುತ್ತದೆ .ಇತ್ತೇಚೆಗೆ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಅಪಾರಧರ್ಶಕತೆ ಪ್ರದರ್ಶಿಸಿ ಇದರ ಬಗ್ಗೆಯೂ ಅನುಮಾನವನ್ನು ಪಡುವ ಹಾಗೆ ಮಾಡಿಕೊಂಡ ಮತ್ತೊಂದು ಮಹತ್ತರ ಸಂಸ್ಥೆಯೇ ಏರ್ ಫೋರ್ಸ್ ಸ್ಕೂಲ್ ಹೆಬ್ಬಾಳ ಬೆಂಗಳೂರು.

No comments:

Post a Comment