Thursday, November 18, 2010
ಗುರು ಶಿಷ್ಯರ ಸಾಮೂಹಿಕ ನಾಟಕ ಪ್ರಧರ್ಶನ
ದಿನಾಂಕ ೧೬ ನವೆಂಬರ್ ೨೦೧೦ ರ ಸೋಮವಾರ ಎಂದಿನಂತೆ ಗ್ರಂಥಾಲಯದಲ್ಲಿ ಹಿಂದಿನ ದಿನದ ನಾಲ್ಕೈದು ಪತ್ರಿಕೆಗಳು ಕಾಣಲಿಲ್ಲವಾದ್ದರಿಂದ ಅಂದು ಅಲ್ಲಿದ್ದ ಗ್ರಂಥಪಾಲಕಸಹಾಯಕಿಯವರು ಮತ್ತು ಸೋಮವಾರವಾದ ಕಾರಣ ಗ್ರೂಪ್ ಡಿ ನೌಕರರೂ ಹಾಜರಿದ್ದರು ಕಾಣದಿದ್ದ ಪತ್ರಿಕೆಗಳ ಬಗ್ಗೆ ವಿಚಾರಿಸಿದ್ದಕ್ಕೆ ಹಾಜರಾತಿ ಪುಸ್ತಕ ತೋರಿಸಿ ನೋಡೋಣ ಎಂದಿದ್ದಕ್ಕೆ ,ಪಕ್ಕದ ಕಟ್ಟಡದ ಒಬ್ಬ ಪರಿಚಯಸ್ತರು ತೆಗೆದುಕೊಂಡಿದ್ದಾರೆ ಮತ್ತು ಅವರ ರೂಮಿನ ಬಾಗಿಲು ಇನ್ನೂ ತೆಗೆಯದ ಕಾರಣ ಪತ್ರಿಕೆಗಳನ್ನು ಅವರು ಬಂದ ಮೇಲೆ ವಾಪಸ್ಸು ಪಡೆದು ಓದಲು ನೀಡುತ್ತೇವೆಂದು ತಿಳಿಸಿದರು ಸ್ವಲ್ಪ ಬೇಜಾರಾದ ನಾವು ಅವರಿವರಿಗೆಕೆ ಲೈಬ್ರರಿಯ ಪತ್ರಿಕೆಗಳನ್ನು ನೀಡುತ್ತೀರಿ ಅಥವಾ ತೆಗೆದುಕೊಂಡು ಹೋಗಲು ಅನುಮತಿ ನೀಡಿದ್ದೀರಿ ನಿಮ್ಮಗಳ ತಪ್ಪಿನಿಂದ ನಮ್ಮ ಸಮಯ ಹಾಳಾಗುವುದರ ಜೊತೆಗೆ ಇನ್ನೂ ಸರಿಯಾಗಿ ಕೆಲಸ ನಿರ್ವಹಣೆ ಕಲಿತಿಲ್ಲವೆಂದು ಎಚ್ಚರಿಕೆ ನೀಡಿ ಹೊರ ಹೋದೆವು ಈ ಘಟನೆಯಿಂದ ಕುಪಿತಗೊಂದಿದ್ದ ಸಿಬ್ಬಂದಿಯು ಎಚ್ಚರಿಕೆ ನೀಡಿದ ವ್ಯಕ್ತಿಗೆ ಏನಾದರೂ ನಾವು ತಿರುಗೇಟು ನೀಡಲೇಬೇಕೆಂದು ಪಣತೊಟ್ಟ೦ತಿತ್ತು ಅದಕ್ಕೆಂದೇ ದಿನಾ೦ಕ ೧೭ ನವೆಂಬರ್ ೨೦೧೦ ರಂದು ಬಕ್ರೀದ್ ಹಬ್ಬದ ರಜೆಯಿದ್ದದ್ದರಿಂದ ಈ ದಿನದ ಪತ್ರಿಕೆಗಳನ್ನು ದಿನಾಂಕ ೧೮ ರ೦ದು ಎಂದಿನಂತೆ ಓದುತ್ತಿದ್ದಾಗ ಕಾಣಸಿಗಲಿಲ್ಲದ ದಿನಾಂಕ ೧೭ ರ ಬೇರೆ ಪತ್ರಿಕೆಗಳ ಬಗ್ಗೆ ಕೇಳಿದೆವು, ಆ ಮಹಿಳಾ ಸಿಬ್ಬಂದಿಯು ಆಬ್ಸೆಂಟ್ ಹಾಕಿದ್ದೀವಿ ಹೋಗ್ರಿ ಎಂದರು ಮೊದಲೇ ಸಾರ್ವಜನಿಕರ ನ೦ಬಿಕೆ ಕಳಕೊಂಡಿರುವ ಇವರನ್ನು ಸಂಪೂರ್ಣ ನ೦ಬಲಾಗದೆ೦ದು ಹಾಜರಾತಿ ಪುಸ್ತಕ ತೋರಿಸಲು ಕೇಳಿದೆವು,ಆ ಮಹಿಳಾ ಸಿಬ್ಬಂದಿಯು, ತೋರಿಸಲೋ ಬೇಡವೋ ಎಂಬಂತೆ ಶನ್ನೆಯ ಮೂಲಕ ಗ್ರೂಪ್ ಡಿ ನೌಕರನ ಆಜ್ಞೆ ಕೇಳಿದರು. ಸಾರ್ವಜನಿಕರಿಗೆ ಹಾಜರಾತಿ ಪುಸ್ತಕ ತೋರಿಸುವ ಕಾನೂನು ಇಲ್ಲ ಹಾಗೂ ತೋರಿಸಬಾರದೆಂದು ನಮ್ಮ ಮಂಡ್ಯ ಸಾಹೇಬರು ಹೇಳಿದ್ದಾರೆ ಎಂದು ಇಬ್ಬರೂ ಕ್ಯಾತೆ ತೆಗೆದು ಜಗಳ ತೆಗೆದರು, ನಾವು ತೋರಿಸಲೇ ಬೇಕು ಎಂದು ಪಟ್ಟು ಹಿಡಿದು ಬಂದಿರದ ಪತ್ರಿಕೆಗಳಿಗೆ ಆಬ್ಸೆಂಟ್ ಮಾಡಿಸಿದೆವು ಮೊದಲೇ ನನ್ನ ಮೇಲೆ ಹೆಚ್ಚು ಕುಪಿತಗೊಂಡಿದ್ದ ಗ್ರೂಪ್ ಡಿ ಸಿಬ್ಬಂದಿಯು ಮತ್ತದೇ ತಮ್ಮ ವರಸೆ ತೆಗೆದು ನಾವು ಹಿಂದಿನ ದಿನದ (೧೭ರ)ಪತ್ರಿಕೆಗಳನ್ನು ಓದುತ್ತಿದ್ದ ಸಮಯದಲ್ಲಿ ನಮ್ಮ ಕಣ್ಣಿಗೆ ಸಿಗದ ಹಾಗೆ ಬೇರೆಡೆ ಬಚ್ಚಿಟ್ಟಿದ್ದ, ದಿನಾಂಕ ೧೭ ರ ಕನ್ನಡ ಪ್ರಭ ಪತ್ರಿಕೆಯನ್ನು ' ಆಗಲೇ ಓದಿ ಮುಗಿಸಿ ಇಟ್ಟಿದ್ದ ಪತ್ರಿಕೆಗಳೊಂದಿಗೆ ಯಾರಿಗೂ ಗೊತ್ತಾಗದ ಹಾಗೆ ಉಪಾಯದಿಂದ ಸೇರಿಸಿಬಿಟ್ಟಿದ್ದರು ಎಂಬುದು ಇವರ ಮಾಮೂಲಿ ಚಮತ್ಕಾರಗಳಲೊಂದು.ಹಾಗೂ ತಮಗೆ ಪತ್ರಿಕೆಗಳನ್ನೋದಗಿಸುವ ಪಕ್ಕದ ಕಚೇರಿಯಲ್ಲಿನ ಪತ್ರಿಕಾ ಸರಬರಾಜುಧಾರರೊಬ್ಬರನ್ನು ಕರೆತಂದು ತಾವೇ ಉಪಾಯದಿಂದ ಸೇರಿಸಿದ್ದ ಕನ್ನಡ ಪ್ರಭ ಪತ್ರಿಕೆಯನ್ನು ತೋರಿಸುತ್ತಾ 'ನೋಡಿ ದಿನಾಂಕ ೧೭ ರ ಕನ್ನಡ ಪ್ರಭ ಪತ್ರಿಕೆ ಬಂದಿದೆ ಆದರೂ ಆಬ್ಸೆಂಟ್ ಬೀಳಿಸಿದರು ಎಂದು ಮುಂಚೆಯೇ ಬರೆದುಕೊಂಡಿದ್ದ ಕಥೆಗೆ ನಾಟಕ ಪ್ರದರ್ಶಿಸಿ ಓದುಗರಿಂದ ತಮ್ಮ ಮೇಲೆ ಕನಿಕರ ಬರಿಸಲು ಯಶಸ್ವಿಯೂ ಆದರು ಮತ್ತು "ಟೇಬಲ್ ಕುಟ್ಟಿ ನಮ್ಮನ್ನು ಪ್ರತಿದಿನವೂ ಏನೇನೋ ಪ್ರಶ್ನಿಸುತ್ತಾರೆ "ನೀವೇ ಸಹಾಯ ನೀಡಿ ಎಂದು ನ್ಯಾಯ ಕೂಡ ಒಪ್ಪಿಸಿದರು, ಆ ಏಜೆ೦ಟರು, ಏಕವಚನದಲ್ಲಿ ಮಾತನಾಡಿಸುತ್ತಾರೆ 'ಟೇಬಲ್ ಕುಟ್ಟಿ ನಮ್ಮನ್ನು ಪ್ರಶ್ನಿಸುತ್ತಾರೆ ನಮ್ಮ ಮರ್ಯಾದೆಗೆ ತೊಂದರೆಯಾಗುತ್ತಿದೆ ಎಂದು ಪೊಲೀಸರಿಗೆ ತಿಳಿಸಿ' ಅವರೇ ಬಂದು ಒದ್ದು ಎಳೆದುಕೊಂಡು ಹೋಗುತ್ತಾರೆ ಎಂದು ಸಲಹೆ ನೀಡಿದಕ್ಕೆ ವಿರೋಧ ವ್ಯಕ್ತಪಡಿಸಿದ ನಾವು, ತಕ್ಷಣ ಅಲ್ಲಿ ನೆರೆದಿದ್ದ ಬೇರೆ/ ಇತರೆ ಓದುಗರಿಗೆ ಈ ಸುಳ್ಳಿನ ಬಗ್ಗೆ ನಿಮ್ಮ ಅಭಿಪ್ರಾಯವೇನೆಂದು ಕೇಳಿ, ಸುಳ್ಳು ನ೦ಬಿಸುತ್ತಿದ್ದ ಗ್ರೂಪ್ ಡಿ ಸಿಬ್ಬಂದಿಯ ವಂಚನೆಯನ್ನು ನಿಲ್ಲಿಸಿದ್ದನ್ನರಿತ ಆ ಪತ್ರಿಕಾ ಸರಬರಾಜುಧಾರರು ತಾನೇ ಸಮಸ್ಯೆ ತಂದುಕೊಂಡು ಬಿಟ್ಟೇನೆ೦ದು ಹೆದರಿ ಅಲ್ಲಿಂದ ಜಾಗ ಖಾಲಿ ಮಾಡಿದರು . ಇದರಿಂದ ಉಪಯೋಗವಾದಂತೆ ಕಾಣದ ಆ ಸಿಬ್ಬಂದಿಗಳು ತಾವೇ ಸಾರ್ವಜನಿಕ ಓದುಗರ ಸೋಗಿನಲ್ಲಿ ಕರೆತಂದಿದ್ದ ತಮ್ಮ ತಮ್ಮ ಕಡೆಯ ವ್ಯಕ್ತಿಗಳ ಮುಖಾಂತರ ತಮ್ಮನ್ನು ಪ್ರಶ್ನಿಸುತ್ತಿದ್ದ ವ್ಯಕ್ತಿಗೆ ಬುದ್ದಿ ಹೇಳಿಸಲು ವಿಫಲರಾದರೂ ಕೂಡ. ಇದೆ ರೀತಿ ಗ್ರಂಥಾಲಯದವರ/ದ ಯಾವುದೇ ತಪ್ಪನ್ನು ಕಂಡು ಹಿಡಿದು ನಮಗೆ ಕಿರಿ ಕಿರಿ ಮಾಡಿದರೆ ನಾವೇ ನಿಮ್ಮ ಮೇಲೆ ಪೊಲೀಸರಿಗೆ ದೂರು ನೀಡುತ್ತೇವೆ ಉಷಾರ್ ಎಂದು ಎಚ್ಚರಿಕೆಯನ್ನೂ ನೀಡಿದರು. ಇದು ಗ್ರಂಥಾಲಯದಲ್ಲಿನ ನಿತ್ಯ ಸತ್ಯ .
Subscribe to:
Post Comments (Atom)

No comments:
Post a Comment